ಕುಂದಾಪುರ: ಮಳೆಗಾಗಿ ಸೋಮವಾರ ತಾಲೂಕಿನ ನಾನಾ ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಸೀಯಾಳಾಭಿಷೇಕ ನಡೆಯಿತು.
ಕುಂಭಾಸಿ ಹರಿಹರ ದೇವಸ್ಥಾನ: ಉದ್ಯಮಿ ಬಿ.ಪಿ.ಶ್ರೀನಿವಾಸ, ಕುಂಭಾಸಿ ಮಾಣಿಮನೆ ಹಿರಿಯ ಕಷಿಕ ಬಸವಣ್ಣ ನೇತತ್ವದಲ್ಲಿ ಕುಂಭಾಸಿ, ತೆಕ್ಕಟ್ಟೆ, ಕೊರವಡಿ ಗ್ರಾಮಸ್ಥರ ಸಹಯೋಗದೊಂದಿಗೆ ವಿಶೇಷ ಪೂಜೆ, ಸೀಯಾಳಾಭಿಷೇಕ ಕಾರ್ಯಕ್ರಮ ಜರುಗಿತು.
ಗೋಪಾಡಿ ಕಾಂತೇಶ್ವರ ದೇವಸ್ಥಾನ: ಗೋಪಾಡಿ ಯುವಕ ಮಂಡಲ ಮತ್ತು ಸಹನಾ ಯುವತಿ ಮಂಡಲ, ಗ್ರಾಮಸ್ಥರ ವತಿಯಿಂದ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ, ಸೀಯಾಳಾಭಿಷೇಕ ನಡೆಯಿತು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ.ನರಸಿಂಹ ಮೂರ್ತಿ, ಕಾರ್ಯದರ್ಶಿ ಕಷ್ಣಮೂರ್ತಿ ಹತ್ವಾರ್, ಯುವಕ ಮಂಡಲ ಗೋಪಾಡಿ ಗೌರವಾಧ್ಯಕ್ಷ ಬಿ.ಜಿ. ಸೀತಾರಾಮ ಧನ್ಯ,ಅಧ್ಯಕ್ಷ ಶ್ರೀಪತಿ ಉಪಾಧ್ಯಾಯ, ಸಮಾಜ ಸೇವಕ ಗಣೇಶ್ ಭಟ್ ಗೋಪಾಡಿ, ಸಹನಾ ಯುವತಿ ಮಂಡಲ ಅಧ್ಯಕ್ಷ ಸುಜಾತ ಆಚಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ತೆಕ್ಕಟ್ಟೆ, ಊಳ್ತೂರು, ಕೆದೂರು ಹಾಗೂ ಬೇಳೂರು ಗ್ರಾಮಸ್ಥರಿಂದ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ನೇತತ್ವದಲ್ಲಿ ವಿಶೇಷ ಪೂಜೆ, ಸೀಯಾಳ ಅಭಿಷೇಕ ನಡೆಯಿತು. ದೇವಳದ ಆಡಳಿತ ಮಂಡಳಿ ಸರ್ವ ಪದಾಧಿಕಾರಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
0 comments:
Post a Comment