ಬ್ರಹ್ಮಾವರ: ಮಂದಾರ್ತಿ ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ 14ನೇ ವರ್ಷದ ಉಚಿತ ಸಾಮೂಹಿಕ ವಿವಾಹವು 2015ನೇ ಮೇ 6ರ ಬುಧವಾರದಂದು ಶ್ರೀ ಕ್ಷೇತ್ರದಲ್ಲಿ ಜರಗಲಿದೆ. ವಧುವಿಗೆ ಕರಿಮಣಿ ಸರ, ಧಾರೆ ಸೀರೆ ಮತ್ತು ವರನಿಗೆ ಕುರ್ತಾಪೈಜಾಮ ಹಾಗೂ ಹೂವಿನಹಾರವನ್ನು ಶ್ರೀ ದೇವಳದ ವತಿಯಿಂದ ನೀಡಲಾಗುವುದು. ಸಮಾರಂಭಕ್ಕೆ ಆಗಮಿಸುವ ವಧು ವರರ ಕಡೆಯವರಿಗೆ ದೇವಳದ ವತಿಯಿಂದ ಉಚಿತ ಭೋಜನ ವ್ಯವಸ್ಥೆಯಿದೆ.
ಸರಕಾರದ ಆದರ್ಶ ವಿವಾಹ ಯೋಜನೆಯಡಿ ವಧುವಿಗೆ ದೊರೆಯುವ ಪ್ರೋತ್ಸಾಹ ಧನ ಪಡೆಯಲು ಅನುಕೂಲವಾಗುವಂತೆ ಆ ದಿನವೇ ವಿವಾಹ ನೋಂದಣಿಗೆ ಕ್ರಮ ತೆಗೆದುಕೊಳ್ಳಲಾಗುವುದು. ದೇವಳದ ವತಿಯಿಂದ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಬಯಸುವವರು ದೇವಳದ ಕಚೇರಿಯಲ್ಲಿ ಎಪ್ರಿಲ್ 10ರ ಒಳಗೆ ಹೆಸರನ್ನು ನೋಂದಾಯಿಸಬೇಕಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಾಮೂಹಿಕ ವಿವಾಹದ ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ದೇವಳದ ಕಚೇರಿ (0820-2568333, 2568433) ಸಂಪರ್ಕಿಸಬಹುದಾಗಿದೆ.
0 comments:
Post a Comment